ನಿನ್ನ ನೆನಪಲ್ಲಿ ನಮ್ಮ ಬದುಕು
ಹಸನಾಯಿತು ಓ ಚೇತನವೇ
ಚೈತ್ರದ ಚಿಗುರಿನಂತೆ
ಕೋಟಿ ಹ್ರದಯವ ಮೀಟಿ
ಕಹಳೆಯೂದಿದೆ ನೀನು
ದೇಶಭಕ್ತಿ ಸ್ಪುರಿಸುವಂತೆ
ಅರಳಿತು ನಮ್ಮೀ ಬದುಕು
ನಿನ್ನಾಗಮನದಿಂದ
ಕತ್ತಲ ದಾರಿಗೆ ಬೆಳಕ ಸೊಡರ ಹಿಡಿದಂತೆ
ಕುಣಿಕುಣಿಯಿತೆಮ್ಮ ಹ್ರದಯ
ಸ್ವಾತಂತ್ರದ ಕಂಪು ತಂದಾಗ ನೀ
ನವೀನ ಪತಥವ ತುಳಿದಂತೆ
ಓಲಾಡಿತು ನಮ್ಮೀ ತನುವು
ಆಶಾಕಿರಣವಾಗಿ ನೀ ಬರಲು
ಬದುಕುವ ಹೊಸ ಉತ್ಸಾಹ ಹುಟ್ಟಿದಂತೆ
ನಿಮ್ಮ ಹೋರಾಟದಲಿ ನಮ್ಮ ಬಾಳು
ಹಸನಾಯಿತು
ಪುಟವಿಟ್ಟ ಬಂಗಾರದಂತೆ
ನಿಮ್ಮೊಲವಿನ ಮುಂಗಾರಿನಲಿ
ನಲಿಯುತಿರುವ ನಾವುಗಳು
ಫಸಲುಟ್ಟ ಭೂಮಿಯಂತೆ
(ಗಾಂದಿಜಿಯ ಆದರ್ಶಗಳು, ಸ್ವಾತಂತ್ರ್ಯಕ್ಕಾಗಿ ಅವರ ಅಹಿಂಸಾ ಚಳುವಳಿಗಳು, ಅವರ ರಾಮ ರಾಜ್ಯದ ಕಲ್ಪನೆಗಳು, ಸದ್ರಢಸುಸಂಸ್ಕ್ರತ ಭಾರತದ ಪ್ರತಿಪಲವೇ ಆಗಬೇಕು ಎನ್ನುವುದೇ ಕವನದ ಆಶಯ)
ಸೋಮವಾರ, ಮೇ 24, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ